ವಾದನಗಳ ಸಮ್ಮಿಶ್ರಣ.. ಕಲಾಸಕ್ತರಿಗೆ ರಸದೌತಣ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 22 , 2013
|
ಡಿಸೆ೦ಬರ್ 22, 2013
|
ವಾದನಗಳ ಸಮ್ಮಿಶ್ರಣ.. ಕಲಾಸಕ್ತರಿಗೆ ರಸದೌತಣ
ಶಿರಸಿ
ಮದ್ದಲೆ, ಚಂಡೆ, ಕೊಳಲು, ತಬಲಾ, ಹೀಗೆ ವಿವಿಧ ವಾದನಗಳ ಸಮ್ಮಿಶ್ರಣ ಜತೆಯಲ್ಲಿ ಯಕ್ಷಗಾನದ ಭಾಗವತಿಕೆ ದ್ವಂದ್ವ ಹಾಡುಗಳನ್ನು ಒಳಗೊಂಡ ಯಕ್ಷನಾದ ವೆಭವ ಕಾರ್ಯಕ್ರಮ ಕಲಾ ಪ್ರಕಾರದ ಹೊಸದೊಂದು ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು. ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಇಂಥದ್ದೊಂದು ಅಪರೂಪದ ಕಾರ್ಯಕ್ರಮ ಏರ್ಪಾಟಾಗಿತ್ತು.
ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ಈ ಎಲ್ಲ ಕಲಾ ಪ್ರಕಾರಗಳ ಕಲೆ ಸವಿ ಸವಿಯಲು ಕಲಾಸಕ್ತರಿಗೆ ಅವಕಾಶವಾಯಿತು. ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್, ಜನನಿ ಮ್ಯೂಸಿಕ್ ಸಂಸ್ಥೆ, ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಯಕ್ಷಗಾನ ಭಾಗವತಿಕೆಯ ದಿಗ್ಗಜರಾದ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಕೊಳಗಿ ಕೇಶವ ಹೆಗಡೆಯವರ ಸುಮಧುರ ಕಂಠದಲ್ಲಿ ಭಾಗವತಿಕೆಯೊಂದಿಗೆ ಆರಂಭಗೊಂಡ ಯಕ್ಷನಾದ ವೆಭವದಲ್ಲಿ ಸಂದರ್ಭಕ್ಕೆ ತಕ್ಕಂತೆ ಕೊಳಲಿನ ಸುಮಧುರತೆ ಹರಡಿದವರು ಕಲ್ಲಾರೆಮನೆ ಪ್ರಕಾಶ ಹೆಗಡೆ. ಆ ಸುಮಧುರತೆಗೆ ತಾಳ ಲಯದಲ್ಲಿ ಎರಿಳಿತಗಳ ಬೊಲ್ಗಳನ್ನು ತಬಲಾದಲ್ಲಿ ಖ್ಯಾತ ತಬಲಾವಾದಕ ಲಕ್ಷ್ಮೀಶ್ ರಾವ್ ಕಲ್ಗುಂಡಿಕೊಪ್ಪ ನುಡಿಸಿದರು. ಮದ್ದಲೆ ವಾದನದಲ್ಲಿ ಮೂರು ಮದ್ದಲೆಗಳೊಂದಿಗೆ ಸಹಕರಿಸಿದವರು ಮದಂಗ ವಾದನ ಖ್ಯಾತಿಯ ಯಲ್ಲಾಪುರ ಶಂಕರ ಭಾಗವತರು. ಚಂಡೆ ವಾದನದಲ್ಲಿ ಮೆನವಿರೇಳಿಸುವಂತೆ ನುಡಿಸಿದವರು ಇಡಗುಂಜಿ ಕಷ್ಣಯಾಜಿ. ಇವೆಲ್ಲ ಸೇರಿದ್ದ ಪ್ರೇಕ್ಷಕರು ವಿನೂತನ ಕಲಾ ವಿಶೇಷತೆಯ ಸೊಬಗನ್ನು ಸವಿದರು.
ಯಕ್ಷನಾದ ವೆಭವವದ ಪೂರ್ವಭಾವಿಯಾಗಿ ಯುವಗಾಯಕಿ ಬೆಂಗಳೂರಿನ ಅಮತಾರಾವ್ ಸಂಗೀತ ಕಛೇರಿ ನಡೆಸಿಕೊಟ್ಟು ಜನಮನ ಗೆದ್ದರು. ಆರಂಭದಲ್ಲಿ ರಾಗ್-ಭೀಮ್ಪಲಾಸ್ನ್ನು ಪ್ರಸ್ತುತಗೊಳಿಸಿ ನಂತರ ಭಜನ್ ಹಾಗೂ ವಚನಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಹಾಗೂ ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಾಥ್ ನೀಡಿದರು. ಇದಕ್ಕೂ ಪೂರ್ವದಲಿ ್ಲನಡೆದ ಸಿತಾರ ವಾದನದಲ್ಲಿ ಸಿತಾರ್ ವಾದಕ ಶೀಗೆಹಳ್ಳಿಯ ಭಾರ್ಗವ ಹೆಗಡೆ ಆರಂಭದಲ್ಲಿ ರಾಗ್ ಮಧುವಂತಿಯನ್ನು ಪ್ರಸ್ತುತ ಗೊಳಿಸಿ, ನಂತರ ರಾಗ್ ಮಿಶ್ರ ಶಿವರಂಜಿನಿಯಲ್ಲಿ ದುನ್ನ್ನು ಸಾದರ ಪಡಿಸಿದರು. ಸಂಘಟಕ ಗಿರಿಧರ ಕಬ್ನಳ್ಳಿ ನಿರೂಪಿಸಿದರು.
ಕೃಪೆ :
http://www.vijaykarnataka.com
|
|
|